Sri VijayaDasara Kavacha
Sri VijayaDasara Kavacha ವಿಜಯದಾಸರ ಕವಚ – ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ || ದಾಸರಾಯನ ದಯವ ಸೂಸಿಪಡೆದನ ದೋಷರಹಿತನ ಸಂತೋಷಭರಿತನ || ೧ || ಜ್ಞಾನವಂತನ ಬಲುನಿಧಾನಿ ಶಾಂತನ ಮಾನವಂತನ ಬಲುವದಾನ್ಯ ದಾಂತನ || ೨ || ಹರಿಯ ಭಜಿಸುವ ನರಹರಿಯ ಯಜಿಸುವ ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ೩ || ಮೋದಭರಿತನ ಪಂಚಭೇದವರಿತನ ಸಾಧುಚರಿತನ ಮನವಿಷಾದಮರೆತನ || ೪ || ಇವರ ನಂಬಿದ ಜನಕೆ ಭವವಿದೆಂಬುದು ಹವಣವಾಗದೋ ನಮ್ಮವರ ಮತವಿದು || ೫ || ಪಾಪಕೋಟಿಯ ರಾಶಿ ಲೇಪವಾಗದೊ ತಾಪಕಳೆವನೋ ಬಲುದಯಾಪಯೋನಿಧಿ || ೬ || ಕವನರೂಪದಿ ಹರಿಯ ಸ್ತವನಮಾಡಿದ ಭುವನ ಬೇಡಿದ ಮಾಧವನ ನೋಡಿದ || ೭ || ರಂಗನೆಂದನ ಭವವು ಹಿಂಗಿತೆಂದನ ಮಂಗಳಾಂಗನ ಅಂತರಂಗವರಿತನ || ೮ || ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ ಸೂಸಿಪಡೆದನ ಉಲ್ಲಾಸತನದಲಿ || ೯ || ಚಿಂತೆ ಬ್ಯಾಡಿರೊ ನಿಶ್ಚಿಂತರಾಗಿರೊ ಶಾಂತ ಗುರುಗಳ ಪಾದವಂತು ನಂಬಿರೋ || ೧೦ || ಖೇದವಾಗದೊ ನಿಮಗೆ ಮೋದವಾಹುದೊ ಆದಿದೇವನ ಸುಪ್ರಸಾದವಾಹುದೊ || ೧೧ || ತಾಪ ತಡೆವನೊ ಬಂದ ಪಾಪ ಕಡಿವನೊ ಶ್ರೀಪತಿಯಪಾದ ಸಮೀಪವಿಡುವನೋ || ೧೨ || ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ ರಂಗನೊಲಿಯನೊ ಭಕ್ತಸಂಗದೊರೆಯದೇ || ೧೩ || ವೇದ ಓದಲು ಬರಿದೆ ವಾದಮಾಡಲು ಹಾದಿಯಾಗದೊ ಬುಧರ ಪಾದ ನಂಬದೆ || ೧೪ || ಲೆಕ್ಕವಿಲ್ಲದಾ ದೇಶ ತುಕ್ಕಿಬಂದರು ದುಃಖವಲ್ಲದೆ ಲೇಶ ಭಕುತಿ ದೊರೆಯದೊ || ೧೫ || ದಾ...